ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ?
ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು?
ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು
ನಿನ್ನ ಸದೃಢ ಕೊರಳು ಬೇಕೇ ಬೇಕು.
ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ
ಬಳಲಿ, ಬಿಳುಪೇರಿ, ಸೂರ್ಯ ಹುಟ್ಟಲೆಂದು ಕಾದಂತೆ ಕಾದಿದ್ದೇನೆ.
ನಾಟಕದ ನಡುವೆ ನಿನ್ನ ಪ್ರವೇಶದ
ಯಾವೊಂದು ಭಾವಭಂಗಿಯೂ ಕಣ್ಣು ತಪ್ಪಬಾರದೆಂದು
ಕಾತರದಿಂದ ಕಾದಿರುವ ಪ್ರೇಕ್ಷಕ ಸಮೂಹ ನನ್ನ ಮುಖ.
ಲೈಟ್ ಹೌಸಿನ ಬೆಳಕಾಡುವ ವಿಶಾಲ ನಗರದ
ಬಯಲ ಬಯಸುವ ಒಳನಾಡ ಕಿರುತೊರೆಯಂತೆ;
ಬೆಟ್ಟದ ಮೇಲೆ ಸುರಿದ ಬಿರುಮಳೆ
ತನ್ನತ್ತ ಹರಿದು ಜೀವ ಉಕ್ಕಿಸಲೆಂದು
ಕಾದ ಮರುಭೂಮಿಯ ನದಿಯ ಪಾತ್ರದಂತೆ;
ಮುಗ್ಧ ಕಿಟಕಿಯಲ್ಲಿ ನಕ್ಷತ್ರವೊಂದು ಕಂಡು
ತನ್ನ ಪ್ರಶ್ನೆಗೆಲ್ಲಾ ಉತ್ತರ ಹೇಳಿತೆಂದು
ಹಂಬಲಿಸುವ ಸೆರೆಯಾಳಿನಂತೆ;
ಕಂಕುಳ ಕೆಳಗಿದ್ದ ಬೆಚ್ಚನೆ ಊರುಗೋಲನ್ನು ದೇವರ ಮುಂದೆಸೆದ,
ಪವಾಡ ಸಂಭವಿಸಿದೆ ಬಿದ್ದಲ್ಲಿಂದ ಮೇಲೇಳಲಾರದ ಹೆಳವನಂತೆ;
ನಾನು ಹಾಗೇ ಬಿದ್ದುಕೊಂಡಿದ್ದು ಕೊನೆಯ ಕಾಣುವವರೆಗೆ
ತೆವಳಬೇಕು ನೀನು ಬಾರದಿದ್ದರೆ.
ನನಗೆ ನೀನಷ್ಟೇ ಬೇಕು.
ಬಿರುಕಲ್ಲಿ ಮೂಡಿದ ಹುಲ್ಲುಗರಿಯ ಸ್ಪರ್ಶ ಪಡೆದು
ಕಾಲು ಹಾದಿಯ ಕಲ್ಲು ಇಡೀ ವಸಂತ ಬೇಕೆಂದು ಹಂಬಲಿಸದೇ?
ಹಳ್ಳಿಯ ಕೆರೆಯಲ್ಲಿ ತನ್ನ ಬಿಂಬ ನೋಡಬಯಸುವ ಚಂದ್ರ
ಮೈದುಂಬಿ ಪೂರ್ಣನಾಗಬೇಡವೆ? ಭವಿಷ್ಯದ ಪೂರ್ಣತೆ
ನಮ್ಮತ್ತ ನಾಲ್ಕು ಹೆಜ್ಜೆಯಾದರೂ ಹಾಕದಿದ್ದರೆ
ಏನಾದರೂ ಪೂರ್ತಿಯಾಗುವುದಾದರೂ ಹೇಗೆ?
ಕೊನೆಗೂ ನೀನು ನಾಟಕದ ಪಾತ್ರವರ್ಗದಲ್ಲಿಲ್ಲವೇ,
ಓ ಹೆಸರು ಹೇಳಬಾರದವಳೇ?
ಉಳಿದಿರುವ ಸಮಯ ಸ್ವಲ್ವ
ನಿನಗೆ ತಕ್ಕವನಾಗಿ ಉಳಿಯೆ;
ವಯಸ್ಸಾಗಿ, ಮುದುಕನಾಗಿ,
ಅಥವ ನನ್ನ ಮಕ್ಕಳು ನನ್ನನ್ನು ಮರವೆಗೆ ದಬ್ಬ…..
ಮುತ್ತು ಚೆಲ್ಲಾಪಿಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಲ್ಲಿ ನಾನು-ನನ್ನಲ್ಲಿ ನೀನು
Next post ಸಾಂಪ್ರದಾಯಿಕತೆ ಮತ್ತು ರಾಜಕಾರಣ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys